ಸದ್ಯದಲ್ಲೇ `ಆಟಗಾರ ತೆರೆಗೆ`
Posted date: 16 Thu, Jul 2015 – 08:55:12 AM

ದ್ವಾರಕೀಶ್ ಚಿತ್ರ ಲಾಂಛನದಲ್ಲಿ ದ್ವಾರಕೀಶ್ ಅವರು ನಿರ್ಮಿಸಿರುವ ‘ಆಟಗಾರ’ ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂಸ್ಥೆಯ ೪೯ನೇ ಕಾಣಿಕೆ ‘ಆಟಗಾರ’.
ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಯೋಗಿ ದ್ವಾರಕೀಶ್. ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಅವರ ಛಾಯಾಗ್ರಹಣವಿದೆ. ಕಣ್ಣನ್ ಪರಮೇಶ್ವರನ್ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರಕಥೆಯನ್ನು ಕೆ.ಎಂ.ಚೈತನ್ಯ ಹಾಗೂ ಕಣ್ಣನ್ ಪರಮೇಶ್ವರನ್ ಬರೆದಿದ್ದಾರೆ. ರೋಹಿತ್ ಪಡಕಿ ಸಂಭಾಷಣೆ ಬರೆದಿರುವ ಈ ಚಿತ್ರದ ಹಾಡುಗಳನ್ನು ಡಾ:ವಿ.ನಾಗೇಂದ್ರಪ್ರಸಾದ್ ಹಾಗೂ ರೋಹಿತ್ ಪಡಕಿ ರಚಿಸಿದ್ದಾರೆ. ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ ಹಾಗೂ ಶಿವು ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚಿರಂಜೀವಿ ಸರ್ಜಾ, ಪಾರೂಲ್ ಯಾದವ್, ಮೇಘನರಾಜ್, ಅನಂತನಾಗ್, ದ್ವಾರಕೀಶ್, ಸಾಧುಕೋಕಿಲ, ರವಿಶಂಕರ್, ಅನುಪ್ರಭಾಕರ್, ಅಚ್ಯುತ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್, ಪವನ್, ಆರೋಹಿತ ಗೌಡ, ಸುನೇತ್ರ ನಾಗರಾಜ್, ರೋಹಿತ್ ಪಡಕಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed